ग्रन्थपरिचयः
by Admin · संस्कृतम्
संस्कृतम्
Featured
by Admin
ಜಗದ್ಗುರುಗಳಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಋಗ್ವೇದದ ನಲವತ್ತು ಸೂಕ್ತಗಳಿಗೆ ಭಾಷ್ಯವನ್ನು ನೀಡಿರುವುದು ವಿದ್ವಾಂಸರಿಗೆ ತಿಳಿದ ವಿಷಯವೇ. ಈ ನಲವತ್ತು ಸೂಕ್ತಗಳ ವ್ಯಾಖ್ಯಾನದ ನೆಪದಲ್ಲಿ, ಸಂಪೂರ್ಣ ವೇದಭಾಗದ ಅಂತರಾರ್ಥವನ್ನೂ ಅವರು ಇಲ್ಲಿ ಸೂಚಿಸಿದ್ದಾರೆ ಎಂದು ಪಂಡಿತರು ಅರಿತಿದ್ದಾರೆ. ಅಪೂರ್ವವಾದ ಹಾಗೂ ಪ್ರಮಾಣಗಳಿಂದ ಸಮೃದ್ಧವಾದ ಈ ಋಗ್ವೇದ ಭಾಷ್ಯಕ್ಕೆ, ಪದ–ವಾಕ್ಯ–ಪ್ರಮಾಣಗಳ ಪಾರಂಗತರಾದ ಶ್ರೀಮತ್ಜಯತೀರ್ಥ ಮುನೀಂದ್ರರು ಟೀಕೆಯನ್ನು ರಚಿಸಿದ್ದಾರೆ. ಈ ಗಂಭೀರವಾದ ಟೀಕಾಗ್ರಂಥದ ಅಂತರಾರ್ಥವನ್ನು ಸ್ಪಷ್ಟಪಡಿಸುವ ಸಲುವಾಗಿ ಶ್ರೀ ಕಂಬಾಲೂರು ರಾಮಚಂದ್ರತೀರ್ಥ ಶ್ರೀಮಚ್ಚರಣರು ಟಿಪ್ಪಣಿಯನ್ನು ರಚಿಸಿದ್ದಾರೆ.
ಶ್ರೀ ರಾಮಚಂದ್ರತೀರ್ಥರು ಶ್ರೀಮಧ್ವ ಭಗವತ್ಪಾದಾಚಾರ್ಯರು ಅಧಿಷ್ಠಿತವಾದ ಸರ್ವಜ್ಞಪೀಠವನ್ನು ಅಲಂಕರಿಸಿದವರು. ಈ ಟಿಪ್ಪಣಿಯು, ಅಲ್ಲಲ್ಲಿ ಭಾಷ್ಯ ಹಾಗೂ ಟೀಕೆಯಲ್ಲಿ ಬಂದಿರುವ ಪದಗಳ ದೋಷರಹಿತತೆಯನ್ನು ನಿರೂಪಿಸುವುದಲ್ಲದೆ, ವ್ಯಾಕರಣಶಾಸ್ತ್ರದ ಪ್ರೌಢಿಮೆಯನ್ನೂ ಪ್ರಕಾಶಿಸುತ್ತದೆ.
ಸಂಪಾದಕರು : ಸಿ.ಆರ್. ಪ್ರದೀಪಸಿಂಹಾಚಾರ್ಯ
ಶ್ರೀಯುತ ಪ್ರದೀಪಸಿಂಹಾಚಾರ್ಯರು ನಾಡಿನ ಪ್ರಸಿದ್ಧ ಗುರುಕುಲಾವದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನವನ್ನು ನಡೆಸಿರುವರು. ಈ ಶತಮಾನದ ಗಣ್ಯಾತಿಗಣ್ಯಸಂತರಾದ ಶ್ರೀಶ್ರೀವಿಶ್ವೇತೀರ್ಥರಲ್ಲಿ ಶ್ರೀಮನ್ನ್ಯಾಯಸುಧಾಧ್ಯಯನವನ್ನು ನಡೆಸಿ ಗುರುಗಳ ವಿಶೇಷ ಕೃಪೆಗೆ ಪಾತ್ರರಾದವರು. ಹತ್ತಾರು ವರ್ಷದ ಪಾಠ ಪ್ರವಚನ ಗ್ರಂಥರಚನೆ ಹಾಗೂ ಗ್ರಂಥಗಳ ಅನುವಾದದ ಅನುಭವವು ಇವರಲ್ಲಿದೆ.
Inclusive of all taxes
ಜಗದ್ಗುರುಗಳಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಋಗ್ವೇದದ ನಲವತ್ತು ಸೂಕ್ತಗಳಿಗೆ ಭಾಷ್ಯವನ್ನು ನೀಡಿರುವುದು ವಿದ್ವಾಂಸರಿಗೆ ತಿಳಿದ ವಿಷಯವೇ. ಈ ನಲವತ್ತು ಸೂಕ್ತಗಳ ವ್ಯಾಖ್ಯಾನದ ನೆಪದಲ್ಲಿ, ಸಂಪೂರ್ಣ ವೇದಭಾಗದ ಅಂತರಾರ್ಥವನ್ನೂ ಅವರು ಇಲ್ಲಿ ಸೂಚಿಸಿದ್ದಾರೆ ಎಂದು ಪಂಡಿತರು ಅರಿತಿದ್ದಾರೆ. ಅಪೂರ್ವವಾದ ಹಾಗೂ ಪ್ರಮಾಣಗಳಿಂದ ಸಮೃದ್ಧವಾದ ಈ ಋಗ್ವೇದ ಭಾಷ್ಯಕ್ಕೆ, ಪದ–ವಾಕ್ಯ–ಪ್ರಮಾಣಗಳ ಪಾರಂಗತರಾದ ಶ್ರೀಮತ್ಜಯತೀರ್ಥ ಮುನೀಂದ್ರರು ಟೀಕೆಯನ್ನು ರಚಿಸಿದ್ದಾರೆ. ಈ ಗಂಭೀರವಾದ ಟೀಕಾಗ್ರಂಥದ ಅಂತರಾರ್ಥವನ್ನು ಸ್ಪಷ್ಟಪಡಿಸುವ ಸಲುವಾಗಿ ಶ್ರೀ ಕಂಬಾಲೂರು ರಾಮಚಂದ್ರತೀರ್ಥ ಶ್ರೀಮಚ್ಚರಣರು ಟಿಪ್ಪಣಿಯನ್ನು ರಚಿಸಿದ್ದಾರೆ.
ಶ್ರೀ ರಾಮಚಂದ್ರತೀರ್ಥರು ಶ್ರೀಮಧ್ವ ಭಗವತ್ಪಾದಾಚಾರ್ಯರು ಅಧಿಷ್ಠಿತವಾದ ಸರ್ವಜ್ಞಪೀಠವನ್ನು ಅಲಂಕರಿಸಿದವರು. ಈ ಟಿಪ್ಪಣಿಯು, ಅಲ್ಲಲ್ಲಿ ಭಾಷ್ಯ ಹಾಗೂ ಟೀಕೆಯಲ್ಲಿ ಬಂದಿರುವ ಪದಗಳ ದೋಷರಹಿತತೆಯನ್ನು ನಿರೂಪಿಸುವುದಲ್ಲದೆ, ವ್ಯಾಕರಣಶಾಸ್ತ್ರದ ಪ್ರೌಢಿಮೆಯನ್ನೂ ಪ್ರಕಾಶಿಸುತ್ತದೆ.
ಸಂಪಾದಕರು : ಸಿ.ಆರ್. ಪ್ರದೀಪಸಿಂಹಾಚಾರ್ಯ
ಶ್ರೀಯುತ ಪ್ರದೀಪಸಿಂಹಾಚಾರ್ಯರು ನಾಡಿನ ಪ್ರಸಿದ್ಧ ಗುರುಕುಲಾವದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನವನ್ನು ನಡೆಸಿರುವರು. ಈ ಶತಮಾನದ ಗಣ್ಯಾತಿಗಣ್ಯಸಂತರಾದ ಶ್ರೀಶ್ರೀವಿಶ್ವೇತೀರ್ಥರಲ್ಲಿ ಶ್ರೀಮನ್ನ್ಯಾಯಸುಧಾಧ್ಯಯನವನ್ನು ನಡೆಸಿ ಗುರುಗಳ ವಿಶೇಷ ಕೃಪೆಗೆ ಪಾತ್ರರಾದವರು. ಹತ್ತಾರು ವರ್ಷದ ಪಾಠ ಪ್ರವಚನ ಗ್ರಂಥರಚನೆ ಹಾಗೂ ಗ್ರಂಥಗಳ ಅನುವಾದದ ಅನುಭವವು ಇವರಲ್ಲಿದೆ.
No table of contents has been added for this language yet.
No reviews yet.
संस्कृतम्
Listed author for this volume. For more works, browse the publications catalogue or contact the institution.
View publications →